Wednesday, March 16, 2011

ಹಸಿವು

ಯಾವ ದೇವರಿಗೂ
ಕೂಡ ಕರುಣೆ ಎಂಬುದೇ ಇಲ್ಲ.
"ಹುಟ್ಟಿಸಿದ ದೇವರು,
ಹುಲ್ಲು ತಿನ್ನಿಸುವುದಿಲ್ಲ'"
ಎನ್ನುವುದೆಲ್ಲವೂ ಬರೀ ಸುಳ್ಳು..!!


ಉಡಲು ಬಟ್ಟೆ ಇಲ್ಲ,
ತಿನ್ನಲು ಊಟವಿಲ್ಲ,
ಶಾಲೆಯಿಲ್ಲ, ಮನೆಯಿಲ್ಲ,
ಕೆಲಸವಿಲ್ಲ, ಆರ್ಥಿಕ ಲಾಭವಿಲ್ಲ,
ಯಾವ ಜನುಮದ
ಪಾಪವೇನೋ ಇವರದು..!!

ಪಿಜ್ಜಾ-ಬರ್ಗರ್ ಅಂತಾ,
ಇನ್ನೇನ್ನೇನೋ ಅದು-ಇದು ಎಂದು,
ಸಾವಿರಾರು ಖರ್ಚು ಮಾಡುವ
ನಾವುಗಳು, ಇವರನು ಕಂಡಾಗ
ಹಿಡಿ ಅನ್ನವಾದರೂ ಹಾಕೋಣ.,
ಬಿಡಿಗಾಸಾದರೂ ನೀಡೋಣ.


ಮಾನವತೆಯ ಮೆರೆಯೋಣ..
ಗೆಳೆಯರೇ ಮಾನವತೆಯ ಮೆರೆಯೋಣ..

2 comments: