Friday, June 17, 2011

ಕಾಗದದ ದೋಣಿ



ಯಾವುದೋ ಪುಸ್ತಕದ ಮಡಿಲಲ್ಲಿ,
ಹಾಯಾಗಿ ಮಲಗಿದ್ದೆ ನಾನು..
ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,
ನನ್ನ. ಅಬ್ಬಾ..! ದೋಣಿಯಾಗಿದ್ದೆ ನಾನು.

ಮರೆತೆ ನಾನು, ಮಡಿಚಿಟ್ಟ ನೋವನ್ನು
ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು.
ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,
ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು.

ಅವಳ ಕೋಮಲ ಪಾದಗಳು ಕೆಸರಾಯ್ತು,
ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,
ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು..
ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು.

ಈ ಸಂತೋಷದ ಗಳಿಗೆಯ ನಡುವೆ,
ಮುಳುಗುವಂತಾದೆ ನಾ, ತುಸು ಗಾಳಿ ಬೀಸಿ,
ಮಳೆಯು ಮತ್ತೆ ಬರುತ್ತಲ್ಲಿತ್ತು.. ಅವಳು
ಅಳುತ್ತಾ ಹೊರಟೇಹೋದಳು, ಅಮ್ಮ ಕರೆದಳೆಂದು

ಇದೇ ಇರಬೇಕು ಹುಟ್ಟು-ಸಾವು.
ಆ ಮುಗ್ಧ ಹೃದಯಗಳ ಸಂತಸಕೆ,
ಮತ್ತೆ ಮತ್ತೆ ನೆನಪಾಗುವೇ ನಾನು.
ನಾನೇ .. ಅವಳ ಅಪ್ಪ ಮಾಡಿಕೊಟ್ಟ
ನಾವಿಕನಿಲ್ಲದ.. ಕಾಗದದ ದೋಣಿ.

Friday, June 3, 2011

ಹಚ್ಚಹಸಿರ ಪರಿಸರ.


ಆಹಾ ಎಲ್ಲೆಲ್ಲೂ ನೋಡಿದರೂ,
ಮನಕೆ ಮುದನೀಡುವ ಹಚ್ಚಹಸಿರು..
ಇದೆ ತಾನೇ, ಪರಮಾನಂದಕೆ ತವರು.

ಎತ್ತರದ ಮರಗಳ ಹೊದಿಕೆಯ
ನುಸುಳಿ ಬರುತಿದೆ ರವಿಕಿರಣಗಳು,
ಆ ಹುಲ್ಲು ಹಾಸಿಗೆಯ ತಾಕಿ,
ಕರಗಿಸುತೆ ಮಂಜಿನ ಇಬ್ಬನಿಯ ಸಾಲು.
ಅಲ್ಲಲ್ಲಿ.. ಮರೆಯಲ್ಲಿ.. ನಸುನಗುತಿವೆ,
ಕಂಪು ಸೂಸುವ ಕಾಡಿನ ಸುಮಗಳು.
ಆ ಸುಮಗಳ ಕಂಪಿನ ಕರೆಗೆ ಏನೋ,
ಎಲ್ಲಿಂದಲೋ ಬಂದವು ಬಣ್ಣದ ಚಿಟ್ಟೆಗಳು..

ಇಂದಿನ ಕಾಂಕ್ರೀಟ್ ಕಾಡಿನಲ್ಲಿ
ಮರೆಯಾಗುತಿದೆ ಈ ಸೊಬಗು.
ಇದು ಹೀಗೆಯೇ ಮರೆಯಾದರೇ,
ಮನುಕುಲ ಮರೆಯಾದರೇನಿಲ್ಲ ಬೆರಗು.!!
ಗೆಳೆಯರೇ ಗಿಡ-ಮರ ಬೆಳೆಸಿರಿ,
ನಮ್ಮ ಈ ಸುಂದರ ಪರಿಸರ ಉಳಿಸಿರಿ,
ನಮ್ಮ ಮುಂದಿನ ಪೀಳಿಗೆಯ,
ಬದುಕಿಗೆ ನೀವು ಬೆಳಕಾಗಿರಿ..!!!

ಇಂದು ವಿಶ್ವ ಪರಿಸರ ದಿನ,
ಪರಿಸರ ರಕ್ಷಿಸಿ, ಭೂಮಿಯ ಉಳಿಸಿ.

Thursday, May 26, 2011

ಇನಿಯಾ..!! ನಿಮ್ಮ ಪ್ರೀತಿ..



ಕಾಡದಿರಲಿ ವಿರಹದ ಭೀತಿ,
ನನಗಂತು ಬೇಕು ಸದಾ,
ಇನಿಯಾ .. ನಿಮ್ಮ ಪ್ರೀತಿ..!!

ಮದುವೆಯಾದ ಹೊಸತರಲ್ಲಿ,
ನನ್ನ ನಡು ಹಿಡಿದು,
ತುಟಿಗೆ ತುಟಿಯೊತ್ತಿ ಅಂದು
ನೀವು ಕೊಟ್ಟ ಚುಂಬನಕೆ,
ನನ್ನ ಮೈಯೆಲ್ಲಾ ಕಂಪಿಸಿ,
ನಿಮ್ಮನ್ನು ಇನ್ನೂ ಬಿಗಿದಪ್ಪಿದೆ,
ಏನಾಗುತಿದೆ ಎಂಬ ಅರಿವಿಲ್ಲದೇ,
ಕಣ್ಮುಚ್ಚಿ ಹಿತವಾಗಿ ನರಳುತ್ತಿದ್ದೆ,
ಅದ್ಯಾಕೊ ನನಗೂ ಗೊತ್ತಿಲ್ಲದೆ.

ಪ್ರತಿದಿನ ಸಂಜೆಯಲಿ, ನೀವು
ನನ್ನ ಹೆರಳ ಸರಿಸಿ, ಮುತ್ತಿಟ್ಟು
ಮಲ್ಲಿಗೆ ಹೂ ಮುಡಿಸುವ ಪರಿಗೆ,
ಎಳೆ ಮಗುವಿನಂತೆ ನಾನು,
ನಲಿದಾಡುತ್ತಿದ್ದೆ ನಿಮ್ಮ ತೋಳಲಿ,
ನೀವು ತೋರುವ ಅನಂತ ಪ್ರೀತಿಗೆ..

ಯಾವ ಜನುಮದ ಪುಣ್ಯವೋ,
ನಾ ಕಾಣೆ, ನನಗೆ ಸಾವೇ ಬರದಿರಲಿ..
ನನಗಂತೂ ಬೇಕು... ಸದಾ
ಇನಿಯಾ.. ನಿಮ್ಮ ಪ್ರೀತಿ..!!!

Sunday, May 8, 2011

ಅಮ್ಮಾ...ನನ್ನ ಪ್ರೀತಿಯ ಅಮ್ಮ



ಅಮ್ಮಾ ಎನ್ನೋ ಎರಡಕ್ಷರದಲಿದೆ
ಪ್ರೀತಿ-ವಾತ್ಸಲ್ಯ-ಮಮತೆಯ ಸಿರಿ,
ಆ ಸಿರಿಯ ತುಂಬಿದ ಹೃದಯವು
ನನ್ನ ಜೀವದಾತೆಯದು..,

ನನ್ನ ಕಣ್ಗಳಲಿ ನೀರು ಬಂದರೂ,
ನೀ ಪಡುವ ಹೃದಯದ ನೋವು,
ನಾ ತಪ್ಪು ಮಾಡಿದ ಕ್ಷಣದಲಿ
ಬೆತ್ತದೇಟು ಕೊಟ್ಟು, ಮತ್ತೊಮ್ಮೆ
ಅರಸಿ ಬಂದು, ಮಮತೆ ತೋರುವ
ನಿನ್ನ ಪ್ರೀತಿಗೆ ಸರಿಸಮಾನರುಂಟೆ..?

ನನ್ನ ಪ್ರತಿ ಹೆಜ್ಜೆಯನೂ ಸಹ
ಸೂಕ್ಷ್ಮದಿ ಗಮನಿಸಿ, ಸರಿಪಡಿಸಿ,
ನಾನಿಡುವ ಪ್ರತಿ ಹೆಜ್ಜೆಯಲೂ
ಗೆಲುವು ಉಂಟಾಗುವಂತೆ ಹರಸಿ
ಹಾರೈಸಿದ ನಿನ್ನ ಹೃದಯದಲಿ
ಬತ್ತದಾ ಪ್ರೀತಿ ಸರಿಸಮಾನರುಂಟೆ..?

ಇಂದು ನಾನು ಬುದ್ದಿವಂತನಾಗಿ,
ಏನಾದರೂ ಸಾಧಿಸದವನಾದರೆ,
ನಿನ್ನ ಹರಕೆಯ ಫಲವಷ್ಟೆ ಹೊರತು
ನನ್ನ ಅದೃಷ್ಟವೇನಲ್ಲ .. ನನ್ನಮ್ಮಾ..
ನೀ ತೋರುವ ಪ್ರೀತಿ, ಮಮತೆ,
ಮತ್ತ್ಯಾರಿಂದಲಾದರೂ ಪಡೆಯುವುದುಂಟೆ..?

ಅಮ್ಮಾ.. ನನ್ನ ಪ್ರೀತಿಯ ಅಮ್ಮ...

Thursday, April 28, 2011

ಛೀ ಕಳ್ಳಾ..!!!



ಅಯ್ಯೋ ಬೇಸತ್ತು ಹೋಗಿತ್ತು
ಮನ, ಸಾಕುಸಾಕಾಗಿಹೋಗಿತ್ತು.
ನಿನ್ನ ಕೀಟಲೆಗಳಿಗೆ,
ನಿನ್ನ ತರಲೆ ಕಾಟಗಳಿಗೆ,
ಮೊದಲೆ ತಾಳ್ಮೆಯಿರದ ನನಗೆ,
ನಿನ್ನ ಕೊಂದುಬಿಡುವಟ್ಟು,
ಕೋಪ ಉಕ್ಕಿ ಬರುತ್ತಿತ್ತು..

ನೀ ಅದು ಏನು ಮಾಯೆ,
ಮಾಡಿದೆಯೋ ಏನೋ..?
ನೀನೀರದ ಹೊತ್ತಲ್ಲಿ ನಿನ್ನದೇ
ದಾರಿಯನು ನಾ ಕಾಯುತ್ತಿದ್ದೆ.
ನೀ ಬಂದ ಕ್ಷಣದಲಿ, ಕಾಟ
ತಾಳಲಾರದೆ ದೂರದಲ್ಲೆ ನಿಂತು,
ನಾ ನಿನ್ನ ಕದ್ದು ಕದ್ದು ನೋಡುತ್ತಿದ್ದೆ.

ಇದು ಸ್ನೇಹಾನೋ, ಪ್ರೀತಿನೋ
ನನಗೆ ತಿಳಿಯದ ಹಾಗಿದೆ..
ನನ್ನ ಕೋಪವನು ಕರಗಿಸುವ
ಶಕ್ತಿ, ಆ ನಿನ್ನ ನಗುವಿಗಿದೆ.
ನನಗೆ ನಿನ್ನಲಿ ಪ್ರೀತಿ ಮೂಡಿದೆ,
ಕಣೋ .. ನನಗೂ ಗೊತ್ತಿಲ್ಲದೆ.

ಸದಾ ನಿನ್ನ ಜೊತೆಯಲ್ಲಿರೋ
ಆಸೆ ಕಾಡುತಿದೆ ನನಗೆ.
ಹಸಿವೂ ಇಲ್ಲ, ನಿದಿರೆಯೂ ಇಲ್ಲ..
ನಿನ್ನ ನಗುಮೊಗವೇ ಕಾಣುತಿದೆ,
ಎಲ್ಲೆಲ್ಲೂ ಹಗಲಿರುಳು ನನಗೆ.
ನೀನೇ ನನ್ನವನಾಗಬೇಕು,
ಬಾಳಬೇಕು ನಾ, ಖುಷಿಯಾಗಿ ಹೀಗೆ.

ಆಹಾ...!!! ಮುಗುಳ್ನಗೆಯ ನೋಡು,
ಕೊನಗೂ ನನ್ನ ಹೃದಯ
ಕದ್ದುಬಿಟ್ಟೆಯಲ್ಲೋ... ಛೀ ಕಳ್ಳಾ..!!!

Sunday, April 17, 2011

ಯಾರಿಗೆ ಮುತ್ತು ಕೊಡಲಿ..?


ಯಾರಿಗೆ ಮುತ್ತು ಕೊಡಲಿ
ಗೆಳತಿ, ಯಾರಿಗೆ ಮುತ್ತು ಕೊಡಲಿ..?

ಆ ಸಂಜೆಯಲಿ, ತನು
ತಂಪಾಗಿಸಿ, ನಿನ್ನ
ನೆನಪನ್ನು ಹನಿಹನಿಯಾಗಿ ತಂದ
ಮಳೆಹನಿಗೆ ಮುತ್ತು ಕೊಡಲೇ..

ಅದೇ ದಿನ ರಾತ್ರಿಯಲಿ,
ಬೆಳದಿಂಗಳಲಿ, ಅಪ್ಸರೆಯಂತೆ ನಿನ್ನ
ರೂಪವನ್ನು ಕರೆತಂದ ಬೆಳಕು
ಚೆಲ್ಲಿದ ಚಂದ್ರಮನಿಗೆ ಮುತ್ತು ಕೊಡಲೇ..

ಮನಸಿಗೆ ಆಹ್ಲಾದಕರವಾಗಿ,
ನಿನ್ನ ನೆನಪನ್ನೆ ಅಲೆಅಲೆಯಾಗಿ
ಕರೆತಂದ ತಂಪು ತಂಗಾಳಿಗೆ
ನಾ ನೂರು ಮುತ್ತು ಕೊಡಲೇ...
ನನ್ನ ನಿದಿರೆಯ ಕೆಡಿಸಿ,
ನಿನ್ನ ಮುಂಗುರುಳ ಕಚಗುಳಿ ನೆನಸೋ,
ರಾತ್ರಿಯ ತಂಪಿಗೆ ಮುತ್ತು ಕೊಡಲೇ...

ಮನಸಲಿ ಏನೇ ಇದ್ದರೂ,
ಅದರಲಿ ನಿನ್ನ ಸೌಂದರ್ಯ ಬಿಂಬಿಸುತಾ,
ಕಾಡುವ ಕನಸುಗಳಿಗೆ ಮುತ್ತು ಕೊಡಲೇ..
ಎಷ್ಟೇ ಕೊಟ್ಟರೂ, ಬರಿದಾಗದು
ಗೆಳತಿ, ನನ್ನ ಮುತ್ತಿನ ಸಾಗರ.
ಆದರೂ ಇನ್ನೂ ಎಷ್ಟು ದಿನ,
ನಾ ಬಚ್ಚಿಟ್ಟುಕೊಳ್ಳಲಿ...

Friday, April 15, 2011

ಮಳೆ ನಿಂತ ಮೇಲೆ..


ಬಿಡದೆ.. ಧೋ..!! ಎಂದು
ಸುರಿವ ಮಳೆ ಬಿಡಬಾರದೇ ಬೇಗ
ಎಂದು ಮನ ಹಂಬಲಿಸುತ್ತಿತ್ತು.
ನನ್ನ ಯಾವ ಗೋಜಿಗೂ,
ತಲೆ ಕೆಡಿಸಿಕೊಳ್ಳದೆ ತನ್ನ
ಪಾಡಿಗೆ ತಾನು ಮಳೆ ಸುರಿಯುತ್ತಿತ್ತು.

ತಲೆಯೆತ್ತಿ ನೋಡಿದರೆ,
ಆಗಸದ ತುಂಬೆಲ್ಲಾ ಕಪ್ಪನೆ ಮೋಡ.
ನಮ್ಮ ತೋಟದ ಮನೆಯ ಮಣ್ಣಿನ
ದಾರಿಯಲ್ಲೆಲ್ಲಾ ಪುಟ್ಟ ಪುಟ್ಟ ಕೆರೆ-ದಡ.
ಮಣ್ಣಿನ ವಾಸನೆಯ ಜೊತೆ,
ಮೈದುಂಬಿ ನಿಂತ ವನಸಿರಿ ನೋಡ.
ಮರೆತು ನಲಿದಿದೆ ಮನ, ಎಲ್ಲಾ ದುಗುಡ.

ಮಲೆನಾಡ ವನಸಿರಿಯಂತೆ
ರೋಚಕ ಹೆಣ್ಣಿನ ಚೆಲುವು.
ಗಂಡಿನ ಪ್ರೀತಿಯ ವರ್ಷಧಾರೆ
ಸಿಕ್ಕಾಗಲೆ ತಾನೇ, ಆ ಚೆಂದಕೆ
ಇನ್ನಷ್ಟೂ ಮೋಹಕವು.

ಕೆಸರಲ್ಲಿ ಆಡಬೇಕೆಂಬ
ಆಸೆ ಕಾಡಿತ್ತು ಮಗುವಿನಂತೆ,
ಕಂಡವರು ನಕ್ಕಾರು,
ಎಂದು ಸುಮ್ಮನೆ ನಿಂತೆ.
ಅದೇಕೋ ಗೊತ್ತಿಲ್ಲ,
ಮಳೆ ನಿಂತ ಮೇಲೆ... ಮತ್ತೆ
ಮಳೆ ಬರಬಾರದೇ ಎಂದು
ನಾ ಕಾಯುತ್ತಾ.... ನಿಂತೆ..!!

Wednesday, April 6, 2011

ಈ ಸಂಜೆಯಲಿ..

ಅದೆಂತದೋ ಮೌನವಿತ್ತು
ನನಲ್ಲಿ, ಈ ದಿನ ಸಂಜೆಯಲಿ,
ಮನಸು ಸರಿಯಿರಲಿಲ್ಲ,
ಕಾರಣವೂ ತಿಳಿದಿರಲಿಲ್ಲ.
ಗೆಳೆಯರ ಜೊತೆ ಹೊರಟಿದ್ದೆ,
ಕಾರಣವಿರದೆ, ಕಾಡುತ್ತಿದ್ದ ಮೌನದಲಿ.

ಎಲ್ಲರ ಒತ್ತಾಯಕ್ಕಾಗಿ,
ದೋಣಿಯ ಏರಿ ಕುಳಿತೆ,
ಆಕಾಶವೆಲ್ಲ ಬಂಗಾರದಂತೆ
ಹೊಳೆಯುತ್ತಿತ್ತು, ರವಿಕಿರಣದಿಂದ.
ಬಲು ನಿಧಾನವಾಗಿ ಬರುತ್ತಿತ್ತು,
ಆ ನೀರಿನಲೆಗಳು...ಚೆಂದದಿಂದ

ನನಗೆ ತಿಳಿಯದೇ ನಾನು,
ಅಲೆಗಳ ಜೊತೆ ಕೈಸೇರಿಸಿದೆ.
ಅಷ್ಟೂ ಹೊತ್ತು ಕಾಡಿದ್ದ ಮೌನ,
ದೂರವಾಯ್ತು, ನನಗೂ ಗೊತ್ತಿಲ್ಲದೇ..
ಅದ್ಬುತ ಕ್ಷಣಗಳೋ, ಏನೋ,
ನನ್ನ ಮನ ಸೋತು ನೀರಾಗಿದೆ.

ತುಂಬಾ ಉಲ್ಲಾಸದಿಂದ
ಚೀರಾಡುತ್ತಿದ್ದೆ ಮಗುವಿನ ಹಾಗೇ,
ಈ ಸಂಜೆಗಿದು ಎಂಥಾ ಶಕ್ತಿ,
ನೋವೆಲ್ಲ ಸೆಳೆವುದು ಸೂಜಿಗಲ್ಲಿನ ಹಾಗೆ,
ಓ ದೇವರೇ.., ಈ ಸಂಭ್ರಮ,
ಸಂತಸ ಸದಾ ಇರಬಾರದೆ ಹೀಗೆ..

ನಯನ ಮನೋಹರ


ಯಾವ ಪದಗಳ
ಬಳಸಿ ಹೊಗಳಲಿ
ಕನ್ನಡತಿಯ ಕಣ್ಗಳ ಅಂದ,
ನಾ ಕಳೆದುಹೋದದ್ದೆ
ಗೊತ್ತಾಗಲಿಲ್ಲ, ಮೈಮರೆತು
ನಿಂತಾಗ ನೋಡುತ್ತಾ ಚೆಂದ.

ಕಾಮನಬಿಲ್ಲಿನಂತ
ಹುಬ್ಬುಗಳ ನಡುವಣ ಬಿಂದಿ,
ಆ ನಯನಗಳ ಅಂಚಲಿ
ಕಾಡಿಗೆಯ ಕಡುಗಪ್ಪು,
ಕಣ್ಣು ಮಿಟುಕಿಸದೇ ನೋಡುತ್ತಾ
ನಿಂತೆ, ನಾ ನಿನ್ನ ನೋಡಲು
ಬಂದ ಮೊದಲ ದಿನ.
ನನಗಂತೂ ಗೊತ್ತಿಲ್ಲ ಚೆಲುವೇ...
ನಿನಗೆ ಬಂಧಿಯಾದೆ ಹೇಗೆ..ನಾ..!!

ಕವಿ ನಾನಾಗಿ ಹೋದೆ
ಸಖಿ, ನಿನ್ನ ಕಣ್ಗಳನು ನೋಡುತ್ತಾ
ಅವುಗಳ ಬಣ್ಣನೆಯ ಮಾಡುತ್ತಾ..!!
ಕಾಡಿದೆ ಚೆಲುವೆ ನನಗೆ,
ನಿನ್ನ ಮನೋಹರ ಕಣ್ಣೋಟ.
ನೂರು ಜನುಮಗಳು
ಹೀಗೆಯೇ ಇರಲಿ, ಸವಿಯಬೇಕು
ನಿನ್ನ ನಯನಗಳ ಸವಿನೋಟ...

ನಯನ ಮನೋಹರ..
ನನ್ನವಳ ಚೆಲುವು..

Sunday, March 20, 2011

ಕವಿಯೊಬ್ಬನ ಪ್ರಲಾಪ..!!


ಮಾರ್ಚ್ 21, ಇಂದು
ವಿಶ್ವ ಕವನ ದಿನ
ಆದರೆ ಈ ಸಂತಸ,
ನನಗಂತೂ ಪ್ರತಿದಿನ

ಒಂದು ದಿನವೂ ನೀ
ನನಗೆ ಕಾಣದೇ, ಮಾತಾಡದೇ
ಬರಿ ಕನಸಲ್ಲಿಯೇ ಬಂದು,
ಪ್ರತಿ ಇರುಳು ಹೂನಗೆ ಚೆಲ್ಲಿ
ನಿನ್ನ ಪ್ರೀತಿಯ ಅದ್ಬುತ ಶಕ್ತಿಯಿಂದ
ಅದೆಂತಹ ಮೋಡಿ ಮಾಡಿರುವೆ,
ನನಗೆ ನೀ, ಅದ್ಹೇಗೋ
ನನ್ನ ಮನದ ರಾಣಿಯಾಗಿಬಿಟ್ಟೆ.

ಯಾವ ಸುಂದರಿಯರ
ಚೆಲುವು ಸಾಟಿಯಿಲ್ಲ ನಿನಗೆ,
ನಿನ್ನ ಮೋಹಕ ನಗುವಿನ
ಕನಸುಗಳು ಇಷ್ಟ ಕಣೇ ನನಗೆ.
ನಿನ್ನ ಬರುವಿಕೆಗಾಗಿ
ಹಂಬಲಿಸುತಿದೆ ಮನ ಹಾಗೇ...

ನನ್ನೊಳಗಿನ ಮದನ
ಕಾದಿರುವನು ಚೆಲುವೆ
ನಮ್ಮಿಬ್ಬರ ಸಮಾಗಮಕ್ಕಾಗಿ..
ಚೆಲುವೇ.. ಇನ್ನೂ ಕಾಯಿಸಬೇಡ,
ಕಾಡಿಸಬೇಡ, ಸತಾಯಿಸಬೇಡ..
ಈ ಪ್ರೇಮ ವಿರಹವನು
ನಾ ತಾಳಲಾರೆ... ನನ್ನೊಲವೇ..!!!

Wednesday, March 16, 2011

ಮೌನಗೀತೆ..!!!

ಯಾರ ಹಳಿಯಲಿ
ಗೆಳತಿ ನಾನು..
ತವರು ಮನೆಯನ್ನೋ,
ಗಂಡನನ್ನೋ, ವಿಧಿಯನ್ನೋ..!!
.
.
ಮದುವೆ ಮಾಡಬೇಕು
ಎನ್ನೋ ಆತುರದಲಿ ನಡೆದ
ಸಣ್ಣತಪ್ಪಿಗೆ, ಮಗಳ ಬಾಳು
ಹೀಗಾಯ್ತಲ್ಲವೆನ್ನೊ ಹೆತ್ತವರ ಕೊರಗು.
ಗಂಡನ ಪ್ರೀತಿ ಮಾಯವಾಯ್ತು,
ಮಾನಸಿಕ ಹಿಂಸೆ ಶುರುವಾಯ್ತು.
.
.
ಯಾರೊಂದಿಗೂ
ಹೇಳಿಕೊಳ್ಳಲಾಗುವುದು
ನನ್ನೆದೆಯ ಈ ದುಗುಡ.
ದಿನ ರಾತ್ರಿ.. ನನ್ನ ಕಣ್ಗಳು
ಹನಿಯುವುದರ ಮೂಲಕ
ಮೌನಗೀತೆಯನ್ನು ಹಾಡುತಿದೆ,
ಮನಕೆ ಸಮಾಧಾನ ಮಾಡುತಿದೆ.
.
.
ನನಗೆ ಗೊತ್ತು ಬಿಡು,
ಇದು ನನ್ನೊಬ್ಬಳದ್ದೇ ನೋವಲ್ಲ.
ನನ್ನಂತೆಯೇ ಸಾವಿರಾರು
ಹೆಣ್ಣು ಹೃದಯಗಳು
ತಮ್ಮ ಕಣ್ಗಳೊಂದಿಗೆ
ಮೌನಗೀತೆ ಹಾಡುತಿವೆ.

ಹಸಿವು

ಯಾವ ದೇವರಿಗೂ
ಕೂಡ ಕರುಣೆ ಎಂಬುದೇ ಇಲ್ಲ.
"ಹುಟ್ಟಿಸಿದ ದೇವರು,
ಹುಲ್ಲು ತಿನ್ನಿಸುವುದಿಲ್ಲ'"
ಎನ್ನುವುದೆಲ್ಲವೂ ಬರೀ ಸುಳ್ಳು..!!


ಉಡಲು ಬಟ್ಟೆ ಇಲ್ಲ,
ತಿನ್ನಲು ಊಟವಿಲ್ಲ,
ಶಾಲೆಯಿಲ್ಲ, ಮನೆಯಿಲ್ಲ,
ಕೆಲಸವಿಲ್ಲ, ಆರ್ಥಿಕ ಲಾಭವಿಲ್ಲ,
ಯಾವ ಜನುಮದ
ಪಾಪವೇನೋ ಇವರದು..!!

ಪಿಜ್ಜಾ-ಬರ್ಗರ್ ಅಂತಾ,
ಇನ್ನೇನ್ನೇನೋ ಅದು-ಇದು ಎಂದು,
ಸಾವಿರಾರು ಖರ್ಚು ಮಾಡುವ
ನಾವುಗಳು, ಇವರನು ಕಂಡಾಗ
ಹಿಡಿ ಅನ್ನವಾದರೂ ಹಾಕೋಣ.,
ಬಿಡಿಗಾಸಾದರೂ ನೀಡೋಣ.


ಮಾನವತೆಯ ಮೆರೆಯೋಣ..
ಗೆಳೆಯರೇ ಮಾನವತೆಯ ಮೆರೆಯೋಣ..

Thursday, February 10, 2011

ಇನಿಯಾ..


ಓ ನನ್ನ ನಿಯಾ..
ನಾ ಪಡೆದು ತದೃಷ್ಟದ
ಜೀವತ ಮೂರ್ತಿ ರೂಪ ನೀನು..!!

ಕೋಣೆಯಲಿ, ನನ್ನೊಡನೆ ನೀ
ರಮಿಸುವಾಗ, ತ್ತೆಯವರು ಕರೆದರೆದು
ನಾ ಹೊರಟು ನಿತಾಗ
ನಿನ್ನ ಕಣ್ಗಳಲಿ ಮೂಡುವ ಹುಸಿಕೋಪ
ಗೆ ಬಲು ಷ್ಟ ಕಣೋ..

ಪ್ರತಿ ರಾತ್ರಿ ತಪಿನಲಿ
ದೀಪದ ನಸುಬೆಳಕಿನಲಿ,
ನಿನ್ನ ಮನ್ಮಥರೂಪ ಕಡಾಗ
ನಾ ಸೋತು ಹೋದೆ ನಿಯಾ.
ನನ್ನ ತುಟಿಯ ಜೇನು,
ಅಂತರಗದ ಪ್ರೀತಿ,
ಲ್ಲವೂ ನಿನಗಾಗಿಯೇ ಕಣೋ..

ಜೆ ಐದರ ನತರ
ನಿನಗಾಗಿ ಕಾದಿರುವೆ ಬಾಗಿಲಿನಲಿ
ನಿನ್ನ ಕೈ ಹಿಡಿದು, ಭುಜಕ್ಕೊರಗಿ
ಪಾರ್ಕಿನಲಿ ಸುತ್ತಾಡಬೇಕು ಎಂ
ಸೆ ಮೂಡುತಿದೆ ಕಣೋ ಮನಸಲಿ..


Wednesday, February 9, 2011

ಬಾ ಒಲವೇ..


ಬಾ ಒಲವೇ..ಬಾ...
ಹುಣ್ಣಿಮೆಯ ರಾತ್ರಿಯಲಿ,
ಸುದರ ಪ್ರೇಮಕಾಶ್ಮೀರದಲಿ,
ಮೆಲ್ಲಗೆ ಸುರಿವ ಮಜಿನತೆ..
ಪ್ರತಿದಿನವೂ ಮರೆಯದೇ
ಬಾ.. ಒಲವೇ., ನನ್ನ ಕನಸಿನಲಿ..!

ಮೆತ್ತನೇ ಹೂಹಾಸಿಗಯೂ
ಕೂಡ ಮುಳ್ಳಾಗುವುದು.
ಎಂಥ ಗಾಢನಿದಿರೆಯೂ
ಕೂಡ ಮರೆಯಾಗುವುದು.
ಮಾಗಿಯ ಚಳಿಯು ಕೂಡ
ಬೇಸಿಗೆ ಬೇಗೆಯತೆ ಕಾಡುವುದು.
ಕನಸಿನಲೂ ಕೂಡ
ನೀನಿರದ ರಾತ್ರಿಯಲಿ..!!

ಹುಲ್ಲು ಹಾಸಿಗೆಯಲಿ,
ಚೆಲ್ಲಿದ ಬೆಳದಿಗಳಿನಲಿ,
ನಾ ಮಲಗಿರುವಾಗ ನಿನ್ನ ಮಡಿಲಿನಲಿ,
ಸ್ವರ್ಗಸುಖದ ಬಯಕೆ ಯಾಕೆ?
ಚೆಲುವೆ, ಹಾಗೆಯೇ ರುವಾಸೆ.
ಬಾನಲಿ ರವಿ ಮೂಡದಿರಲಿ..

ನೀ ಮರೆಯದೇ ಬಾ ಒಲವೇ,
ಪ್ರತಿ ರಾತ್ರಿ ಕನಸಿನಲಿ.
ಕನಸುಗಳೇ ನನಗೆ
ಸಿರು ಕಣೇ, ಚೆಲುವೆ
ನೀ ಬದು ಸೇರುವವರೆಗೆ
ನನ್ನ ಮನೆ ಅಂಗಳದಲಿ..!