Thursday, December 23, 2010

ಹೊಸ ವರುಷದ ಶುಭಾಷಯಗಳು


ಗೆಳೆಯರೇ... ನನ್ನ ಗೆಳೆತಿಯರೇ...
ಕಳೆದು ಹೋದ ದಿನಗಳಲಿ
ಡ ಕೆಟ್ಟ ಕನಸುಗಳೆಷ್ಟೋ,
ಮಾಸದ ಕಹಿನೆನಪುಗಳೆಷ್ಟೋ..
ಮರೆಯಲಿ
ಮನ,
ದೆಲ್ಲ ಮರೆತು ನಲಿವುದೇ ಜೀವನ.

ನೂರೆ
ಟು ನೋವು-ನಲಿವುಗಳ ನಡುವೆ,
ಮನಸು ಹಕ್ಕಿಯ
ತೆ ಹಾರಿ..
ಬಾಳಲಿ ಸುಖ-ಸ
ತೋಷವು
ಜೋಗ ಜಲಪಾತದ
ತೆ ಧುಮ್ಮುಕ್ಕಿ
ಬರಲಿ ನಿಮ್ಮ ಮನದೊಳಗೆ
ನವವರುಷದ 365
ದಿನಗಳಲ್ಲೂ... ನಮ್ಮೊಳಗೆ.

ನಮ್ಮಗಳ ಪರಿಚಯ
ಕಸ್ಮಿಕ,
ನಮ್ಮ ಸ್ನೇಹವೇ
ಕರ್ಷಕ,
ಬಾಡದಿರಲಿ ಭಾವನೆ,
ಬಾರದಿರಲಿ ವೇದನೆ,
ಬರುವ ಹೊಸದಿನಗಳಲಿ
ನಿಮ್ಮ ಸುಖ-ಸ
ತೋಷದ
ಕ್ಷಣಗಳ ಹ
ಚಿಕೆ ನನ್ನೊಟ್ಟಿಗೆ ರಲಿ..
WISH YOU HAPPY NEW YEAR - 2011

Friday, September 10, 2010

ಏನ್.. ಹುಡ್ಗೀರೋ...!!


ಏನ್ ಹುಡ್ಗೀರೋ.. ಇವ್ರು
ಏನ್ ಹುಡ್ಗೀರೋ...!!

ಮೈಮುಚ್ಚದ ಬಟ್ಟೆ ತೊಟ್ಟು,
ಅಂಗಾಂಗಳ ಪ್ರದರ್ಶಿಸಿ,
ಜಗದ ಹಳದಿ ಕಣ್ಗಳಿಗೆ
ಮಿನುಗು ತಾರೆಗಳಾಗಿರುವರು,
ಇವ್ರು ಫ್ಯಾಷನ್ ಹೆಸರಿನಲಿ.

ಉಜ್ವಲ ಭವಿಷ್ಯ,
ಜೇನು ತುಂಬಿದ ತುಟಿ,
ತನ್ನನು ತಾನು ಮರೆತು
ತನು-ಮನವನ್ನೆಲ್ಲಾ,
ಕೊಟ್ಟರು ಪ್ರೀತಿಯ ಹೆಸರಲ್ಲಿ.

ಪ್ರೀತಿಯ ಬಲೆಯಲಿ,
ಎಷ್ಟೋ ಹುಡುಗರ ತಲೆಕೆಡಿಸಿ.
ಅಮಾಯಕತೆಯ ಸೋಗಿನಿಂದ,
ಮುಗ್ದಹೃದಯಗಳ ರಕ್ತ ಹರಿಸಿ.
ಬಿರುಗಾಳಿಯಂತೆ ಬಂದು,
ಕಾಣದಂತೆ ಮಾಯವಾಗುವರು.
ಬರೀ.. ಹೆಣ್ಣೆಂಬ ಹೆಸರಿನಲಿ.

ಇವರ ಫ್ಯಾಷನ್ ವೇಷ,
ಕಂಡ ಮುದ್ದುಕಂದನೂ ಕೂಡ
ಜೊಲ್ಲು ಸುರಿಸುವಂತಾಯ್ತು..!
ಪ್ರತಿದಿನವೂ ಇವರು,
ಶೋಷಣೆಗೆ ಒಳಗಾಗುವರು
ಕಾಮಬಯಕೆಯ ಹೆಸರಿನಲಿ.

ಹುಡ್ಗೀರೇ.. ಕಾಪಾಡಿ,
ಹೆಣ್ತನದ ಗೌರವವನ್ನು,
ಸೃಷ್ಟಿಯ ಮೂಲವನ್ನು...!
ಕಿತ್ತೂರು ರಾಣಿ ಚೆನ್ನಮ್ಮ,
ಝಾನ್ಸಿರಾಣಿ ಲಕ್ಷ್ಮಿಬಾಯಿಯರಂತೆ
ಬಾಳಿ.. ಈ ದೇಶದ ಮಣ್ಣಲಿ.

ಕಣ್ ಹನಿ


ಮರೆಯಾದೆಯಾ ಚೆಲುವೇ,
ನನ್ನ ಮರೆತು ನೀ ಮರೆಯಾದೆಯಾ?

ಪ್ರತಿರಾತ್ರಿಯ ತಂಪಿನಲಿ,
ಹುಣ್ಣಿಮೆಯ ಬೆಳದಿಂಗಳಿನಲಿ,
ನಾ ಹೆಣೆದುಕೊಟ್ಟಿದ್ದ
ಸಾವಿರ ಕನಸುಗಳನು ಕದ್ದು
ಮರೆಯಾದೆಯಾ ಚೆಲುವೆ.

ನನ್ನೆದೆಯ ಕನಸುಗಳಲಿ,
ನೀನಿರದ ರಾತ್ರಿಯಲಿ,
ಚಂದಿರನೇ ಸುಡುವಂತಾಯ್ತು..!
ನನ್ನ ಪ್ರೇಯಸಿ ನೀನು,
ಅದು ಹೇಗೆ ಹಚ್ಚಿದೆ,
ಈ ಹೃದಯದಲಿ ಆರದಾ ಬೆಂಕಿ.

ನಿನ್ನ ಮರೆತು ಬದುಕುವ
ಕ್ಷಣಗಳ ಕಲ್ಪನೆಯೂ ನನಗಿಲ್ಲ.
ನೀ ಮರೆತುಹೋದೆ,
ಎಂಬ ಬೇಸರವೂ ನನಗಿಲ್ಲ.
ಆದರೂ ಗೊತ್ತಿಲ್ಲ ಕಣೇ,
ಎದೆಯಲ್ಲಿ ಕರಗದ ನೋವೊಂದು
ಕಾಡುತಿದೆ, ಈ ಮನಕೆ
ನೀ ಮಾಡಿದ ಗಾಯದಿಂದ.

ನನ್ನನು ನೆನೆದು ನಿನ್ನ
ಕಣ್ಗಳಲಿ ಜಿನುಗುವ
ಒಂದೇ ಒಂದು "ಕಣ್ ಹನಿ"
ಸಾಕು ಕಣೇ... ನನಗೆ.
ನಿನ್ನ ಹೃದಯದಲಿ
ನನ್ನ ಅನಂತ ಪ್ರೀತಿ..
ಇನ್ನೂ ಜೀವಂತವಾಗಿದೆ,
ಎಂಬ ತೃಪ್ತಿ ನನಗೆ.

ಮಹಾರಸಿಕ


ಹೇ ಹುಡುಗಾ..
ನನ್ನೆದೆ ಪ್ರೀತಿಯ ಸಿರಿಯ
ಕೊಳ್ಳೆಹೊಡೆದ ನೀ
ರಸಿಕ ಮಹಾಶಯ ಕಣೋ...

ನಿನ್ನೆದುರು ನಿಂತಾಗ,
ಎಂಥದ್ದೋ ಮುಜುಗರ.
ಆದರೂ ಗೊತ್ತಿಲ್ಲ, ಕಾಡಿದೆ
ಮರೆಯಲ್ಲಿ ನಿಂತು ನಿನ್ನ
ಪದೆಪದೇ ನೋಡುವ ಕಾತರ.

ಛೀ ಕಳ್ಳಾ..
ಅದೆಂತಾ ಮೋಡಿ ಮಾಡಿದೆ,
ನೀ ನನಗೆ... ನಿನ್ನ
ಬಿಟ್ಟರೆ ಬೇರೇನು
ಕಾಣುತ್ತಿಲ್ಲ ನನಗೆ.

ಬೆಳದಿಂಗಳಲಿ
ನನ್ನ ಹಸಿಕೆನ್ನೆಗೆ,
ನೀ ಕೊಡುವ ಮುತ್ತನು
ನೆನೆದಾಗ ನಿಂತೆ ತುಟಿ ಕಚ್ಚಿ.,
ರೋಮಾಂಚಿತಳಾಗಿ ನೆನೆವೆ
ನನ್ನ ಕಣ್ ಮುಚ್ಚಿ..

ದೂರ ನಿಂತರೂ ಸರಿ,
ನನ್ನನು ಕಣ್ಗಳೊಂದಿಗೆ
ಕೂಡಿ, ಕಣ್ಣಲ್ಲೆ ಸರಸವಾಡುವ
ನೀ ಮಹಾರಸಿಕ ಕಣೋ....

ನಿನ್ನ ತುಂಟ ಕಣ್ಣೋಟ,
ಹೂನಗೆಯಿಂದ ಅರಳುವ ಪ್ರೀತಿ,
ಈ ಜನ್ಮದಲಿ, ಆ ದೇವರಲಿ ಬೇಡಿ
ನಾ ಪಡೆದು ತಂದ ಆಸ್ತಿ..!

Friday, August 6, 2010

ಭಿಕ್ಷುಕನು ನಾನಲ್ಲ..!


ಭಿಕ್ಷುಕನು ನಾನಲ್ಲ,
ಇವರಂಥಾ ಭಿಕ್ಷುಕನು ನಾನಲ್ಲ..!

ಬಡವರ ಹೊಟ್ಟೆಯನು
ಬಡಿದು, ದಿನದ ಮಾಮೂಲು
ಕೇಳುವ ಪೋಲೀಸು ನಾನಲ್ಲ.
ಈಗಲೋ, ಆಗಲೋ
ಸಾಯುವ ರೋಗಿಯನು ಬಿಡದೇ,
ರಕ್ತ ಹೀರುವ ಡಾಕ್ಟರೂ ನಾನಲ್ಲ.

ಪ್ರಜಾಹಿತವ ಬದಿಗೊತ್ತಿ,
ಕೋಟಿಕೋಟಿ ಹಣ ಕೊಳ್ಳೆ ಹೊಡೆವ,
ಡೊಳ್ಳುಹೊಟ್ಟೆ ರಾಜಕಾರಣಿ ನಾನಲ್ಲ.
ಸಾವಿರಾರು ರೂಪಾಯಿ
ಪಗಾರ ಬಂದ್ರೂ, ಲಂಚಕ್ಕಾಗಿ
ಕೈಯೊಡ್ಡೋ, ಸರ್ಕಾರಿ ನೌಕರ ನಾನಲ್ಲ.

ಬಿಸಿಲು ಧೂಳಲ್ಲಿ ಕೂತು,
ಬೇಡಿ ಪಡೆದ ಚಿಲ್ಲರೆ ಕಾಸು,
ಸಾಕು ನನ್ ಹೊಟ್ಟೆ ತಣ್ಣಗಿಡಲು.
ಇರುಳೆಲ್ಲಾ ಸಿಹಿಗನಸು,
ಕಣ್ಗಳಲಿ ಸವಿ ನಿದಿರೆ ಸೊಗಸು,
ನಿಜ, ಭಿಕ್ಷುಕನು ನಾನಲ್ಲ,
ಇವರಂಥಾ ಭಿಕ್ಷುಕನು ನಾನಲ್ಲ...!

ಬಾ...ಒಲವೇ...ಬಾ


ನನ್ನ ಕಣ್ಗಳು
ನಿನ್ನ ಬೊಗಸೆ ಪ್ರೀತಿಗಾಗಿ
ಎದುರು ನೋಡುತ್ತಾ,
ಖಾಲಿ ಬಟ್ಟಲಂತಾಯ್ತು ಗೆಳತಿ

ನಿನ್ನ ತುಟಿಗಳ
ಮೃದುಲ ಸ್ಪರ್ಶಕ್ಕಾಗಿ,
ಕಾದು ನನ್ನ ಕೆನ್ನೆ
ಸುಕ್ಕುಗಟ್ಟಿದ್ದಾಯ್ತು ನನ್ನೊಡತಿ.

ನಿನ್ನ ಹೃದಯದ ಪ್ರೀತಿ
ಅರಸುತ್ತಾ, ಉರಿವ ಲಾವಾರಸದಂತೆ
ಹರಿದಿದೆ ನನ್ನ ನೆತ್ತರು,
ಬದುಕುಳಿವ ಆಸೆಯನ್ನೇ ಕೈಬಿಟ್ಟು.

ಹೇಗಾದರೂ ಸರಿ,
ಬದುಕಿಸಿಕೋ ಈ ಜೀವ
ಜೀವಾಮೃತವನು ಧಾರೆಯೆರೆಯಲು,
ನನ್ನ ತುಟಿಗೆ ತುಟಿ ಒತ್ತುಬಿಟ್ಟು.

ನಿನ್ನ ಪ್ರೀತಿಗಾಗಿ
ಇನ್ನೊಂದು ಜನ್ಮ ಕಾಯಲಾರೆ,
ನಿನ್ನೊಲುಮೆ ಇರದೆ, ನಾ ಬದುಕಲಾರೆ.

ಅರೆಕ್ಷಣವಾದರೂ ಸರಿ
ಗೆಳತಿ, ನಿನ್ನ ಪ್ರೀತಿಯ ಪಡೆದು
ನಿನ್ನ ಮಡಿಲಿನಲ್ಲೆ,
ಚಿರನಿದ್ರೆ ಮಾಡುವೆ, ನಾ ಬಿಡಲಾರೆ.

ಬಾ...ಒಲವೇ ... ಬೇಗ ಬಾ...

Wednesday, June 30, 2010

ಬಾರೋ ಮಳೆರಾಯ..


ಬಾರೋ ಮಳೆರಾಯ
ನಿಂಗಾಗಿ ಕಾದುಕಾದು
ಭೂತಾಯಿ ಒಡಲು ಹಿಂಗೋಯ್ತು.

ಮುಂಜಾನೆ ಹೊತ್ನಾಗೆ,
ನೇಗಿಲ ಹಿಡ್ಕಂಡು ಹೊಂಟು,
ಉಳುಮೆಯ ಮಾಡಿ
ಮೂಡಿದ್ದ ಹಚ್ಚಹಸಿರ ಪೈರು
ನಿಂಗಾಗಿ ಕಾದು ಕಾದು
ಒಣಗಿಹೋಯ್ತಲ್ಲೋ ಮಳೆರಾಯ.

ಹಟ್ಟಿಯಾಗ ಹಿಟ್ಟಿಲ್ಲ.,
ತೋಳ್ನಾಗ ಕಸುವಿಲ್ಲ..!
ನನ್ನ ಕಂದಮ್ಮಗೆ
ಹಸಿವ ಹಿಂಗಿಸಲು
ನನ್ನಾಕೆ ಎದೆಹಾಲು ಬತ್ತೈತೋ..!
ಆ ಗೋಳಾ ನೋಡಿ
ಕಣ್ಣಾಗೆ ನೀರು ಹರಿದೈತೋ.

ಬಡತನದಿ ಬೇಯ್ವ
ನಮಗೆ, ಗೌಡ್ತಿಯ ಸಾಲ,
ಈಸೊಂದು ನೋವ ನುಂಗಿ
ಕಳೆಯೋದು ಹ್ಯಾಂಗ ಕಾಲ,
ನೀನೊಮ್ಮೆ ಬಂದಾರೆ..
ಕೆರೆನೀರ ಕುಡಿದಾದ್ರು
ಜೀವ ಉಳಿಸ್ಕೋತೀವೋ..!

ನೀನೊಮ್ಮೆ
ಬಂದು ಬಿಡೋ ಮಳೆರಾಯ
ನನ್ನ ಎದೆ ತಂಪಾಯ್ತದೋ,
ಬಾರೋ ಮಳೆರಾಯ
ನಿಂಗಾಗಿ ನಾ ಕಾದುಕಾದು
ಸಾಕಾಯ್ತೋ.. ಈ ಜೀವಕ
ಬ್ಯಾಸರ ಬಂದೈತೋ..!

ಕಂದಾ...


ಮುದ್ದುಕಂದಾ,
ಅಮ್ಮಾ ಎನಬಾರದೇ..
ನೀನೊಮ್ಮೆ ಅಮ್ಮಾ ಎನಬಾರದೇ?

ಅವನ್ಯಾರು
ಜವರಾಯ, ಕದ್ದೊಯ್ಯಲು
ನಿನ್ನ ಜೀವ
ಅವನಿಗೇನಿತ್ತು.
ನಿನ್ನ ಮೇಲೆ ಹಗೆ.

ಪ್ರತಿ ಕ್ಷಣ ಕಾಡಿದ್ದೆ,
ನಿನ್ನ ತುಂಟಾಟದಿಂದ
ನೀನಲ್ಲವೇ ನನ್ನ ಜೀವ.
ನಾ ಬಾಳಲಿ ಹೇಗೆ.

ನವಮಾಸಗಳಲಿ
ನಿನ್ನನು ನೆನೆನೆನೆದು
ಖುಷಿಪಡುತ್ತಿದ್ದ ಸಮಯ,
ಸ್ವರ್ಗದ
ಬಾಗಿಲು ತೆರೆದಂತಿತ್ತು
ಈ ಭುವಿಗೆ ನಿನ್ನ
ನಾ ಕರೆತಂದ ಸಮಯ.

ಮರೆತಿದ್ದೆ
ನನ್ನೆಲ್ಲ ನೋವನ್ನು,
ಕಂಡಾಗ ನಿನ್ನ ಮೊಗವು
ಈ ಮನಸು
ನಂದನವನವಾಗಿತ್ತು
ಕಣ್ತುಂಬಿಕೊಂಡಾಗ ನಿನ್ನ ನಗುವು

ಹಾಳುಬದುಕೇ
ಬೇಡ.. ಕಂದಾ ನನಗೆ.
ಇರಲಾರೆ ನಾ.. ನಿನ್ನ ಬಿಟ್ಟು
ಕಂದಾ..
ನನ್ನ ಮುದ್ದುಕಂದಾ
ಅಮ್ಮಾ ಎನಬಾರದೇ
ನೀನೊಮ್ಮೆ ಅಮ್ಮಾಎನಬಾರದೇ..?

ನೋವು


ನೋವೆ,
ಅದೆಲ್ಲಿ ಅಡಗಿರುವೆ,
ಅದು ಹೇಗೆ ಬಂದಿರುವೆ,
ಮನದ
ಸಂತಸವನ್ನೆಲ್ಲಾ ನುಂಗಿ
ಹೀಗೇಕೆ ಕಾಡುವೆ.

ತೃಣಮಾತ್ರದಿ ಬಂದು,
ಬೃಹದಾಕಾರಾದಿ ಬೆಳೆದು,
ಕ್ಷಣಕ್ಷಣವೂ ಬಿಡದೇ
ಮನ ನೋಯಿಸುವೆ ಏಕೆ?

ಜೀವನ
ಸಾಕ್ಷಾತ್ಕಾರಕ್ಕಾಗಿ
ಹಗಲಿರುಳು ಕಂಡ
ಸಾವಿರ ಕನಸುಗಳನು
ಕ್ಷಣಮಾತ್ರದಲಿ
ನೀ ಮರೆಸುವೆ ಏಕೆ..?

ತಂದೆ ಮಮತೆಯ ನೋವು,
ತಾಯಿ ಕರುಳಿನ ನೋವು,
ಹೆಂಡತಿ ಕಣ್ಣೀರಿನ ನೋವು,
ಪ್ರೇಮಿಗಳ ವಿರಹದ ನೋವು,
ಆಪ್ತರ ಅಗಲುವಿಕೆಯ ನೋವು,

ಒಂದಲ್ಲ, ಎರಡಲ್ಲ,
ನೂರು ಬಗೆಯಾಗಿ ಬರುವೆ,
ನನ್ನಂತೆಯೇ
ನಲಿವ ಮನಸುಗಳ
ಹಿಡಿ ನೆಮ್ಮದಿಯನು
ಗಾಳಿಗೆ ತೂರುವೇ ಏಕೆ?

ನಿನ್ನನು ಪ್ರತಿದಿನ
ಅನುಭವಿಸುವುದಕ್ಕಿಂತ,
ಒಮ್ಮೆಲೆ ಸಾವು
ಬರಬಾರದೇ? ಎಂದು
ಕಾತರದಿ ಕಾಯುವಂತೆ
ನೀ ಮಾಡುವೆ ಏಕೆ..?

ಇಷ್ಟೆಲ್ಲಾ ಇಡಿಯಾಗಿ
ನೀ ಕಾಡುತ್ತಿದ್ದಾಗ,
ನನ್ನ ಅಂತರಂಗದಲ್ಲೆಲ್ಲೋ,
ಮೂಡಿದ ಆಶಾಭಾವ
ನನಗೆ ಹೇಳಿದ್ದೇನು ಗೊತ್ತಾ..?
"ಇದೆಲ್ಲಾ ನಿಂಗೆ ಯಾವ ಲೆಕ್ಕ..?"

Tuesday, June 29, 2010

Introduction

Hi... Friends......I am Raghavendra. from Challakere, of Chitradurga District. I designed website www.chitharadurga.com which contains the whole information about our chitradurga district in our regional language and mother tongue Kannada.And I introduce my new collection of poems which is... "BANADA HOOGALU" ( http://banadahoogalu.blogspot.com) .... i.e.,Please read following poems, give your comments... I await for ur response....
thanking You..

R Raghavendra.
Challakere - 577522
www.chitharadurga.com
http://banadahoogalu.blogspot.com
http://durgasahityasammelana.blogspot.com
http://gadagsahitya.blogspot.com
http://chitharaarticls.blogspot.com
http://nannamana.blogspot.com
http://nannedepreethi.blogspot.com